ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

Union External Affairs Minister SM Krishna shaking hands with Iranian Finance Minister Shamsoddin Hosseini before a meeting at Hyderabad House in New Delhi on Thursday. Photo by Shekhar Yadav 08/07/2010

  

 

ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್.‌ ಆರ್‌. ರಂಗನಾಥ್‌ ಎಸ್‌.ಎಂ.ಕೃಷ್ಣ ಅವರ ಬಹುಮುಖೀ ವ್ಯಕ್ತಿತ್ವದ ಅಪರೂಪದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ..   

*** 

ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರನ್ನು ಬರಿಯ ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ಅವರ ವ್ಯಕ್ತಿತ್ವದ ಹಲವು ಮುಖಗಳು ಅರಿವಿಗೆ ಬರದೇ ಇರಬಹುದು. ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಅವರು ವಜ್ರಗಳಲ್ಲೇ ಅತ್ಯುತ್ತಮ ವಜ್ರ!     

* ರಾಮಕೃಷ್ಣಾಶ್ರಮದಂಥ ಸಾಂಪ್ರದಾಯಕ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಉನ್ನತ ಶಿಕ್ಷಣವನ್ನು ಪಾಶ್ಚಾತ್ಯ ವಾತಾವರಣದಲ್ಲಿ (ಅಮೆರಿಕ)ದಲ್ಲಿ ಪಡೆದವರು. ಆರಂಭದಲ್ಲಿ ಇವರನ್ನು ಅಮೆರಿಕ ಕೃಷ್ಣ ಅಂತಲೇ ಇಲ್ಲಿ ಕರೆಯುತ್ತಿದ್ದರು.  

* ಮೊದಮೊದಲು ತಮ್ಮ ವಸ್ತ್ರವಿನ್ಯಾಸವನ್ನು ಸ್ವತಃ ಮಾಡಿಕೊಳ್ಳುತ್ತಿದ್ದರು. ಅವರ ವಾರ್ಡ್‌ರೋಬ್‌ ಸಂಗ್ರಹ ಬಹಳ ದೊಡ್ಡದಿತ್ತು. ಯಾವ ಸಂದರ್ಭದಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬ ಬಗ್ಗೆ ಸೂಕ್ಷ್ಮ ಅರಿವಿತ್ತು.  

* ವಿದೇಶದಲ್ಲಿ ಓದಿದ್ದರೂ ಭಾರತೀಯ ಕಲೆಗಳ ಬಗ್ಗೆ ಅಪಾರ ಒಲವಿತ್ತು. ವಿಶೇಷವಾಗಿ ಕರ್ನಾಟಕ ಸಂಗೀತ ರಸಗ್ರಹಣ ಶಕ್ತಿ ಬಹಳ ಆಳವಾಗಿತ್ತು. ಅದು ಹೇಗೆ ಸಿದ್ಧಿಸಿತ್ತು ಅಂತ ಅವರಿಗೂ ಗೊತ್ತಿರಲಿಲ್ಲ!  

* ರಾಮಕೃಷ್ಣ ಹೆಗಡೆ ಬಿಟ್ಟರೆ, ಸಾಂಸ್ಕೃತಿಕ ಅಭಿರುಚಿ ಹೊಂದಿರುವ ರಾಜಕಾರಣಿ ಎಂದರೆ ಎಸ್‌.ಎಂ.ಕೃಷ್ಣ. ಅದರ ಜೊತೆ ಕ್ರೀಡೆಯಲ್ಲೂ ಅಪಾರ ಒಲವಿತ್ತು.  

 * ಟೆನಿಸ್‌ ಪ್ರಿಯರಾಗಿದ್ದ ಎಸ್‌.ಎಂ.ಕೃಷ್ಣ ಪ್ರತಿವರ್ಷದ ವಿಂಬಲ್ಡನ್‌ ಹಾಗೂ ಅಮೆರಿಕನ್‌ ಓಪನ್‌ ಟೆನ್ನಿಸನ್ನು ಇಂಗ್ಲೆಂಡ್‌ ಹಾಗೂ ಅಮೆರಿಕಕ್ಕೆ ಹೋಗಿಯೇ ವೀಕ್ಷಿಸುತ್ತಿದ್ದರು. ಪ್ರತಿ ಸಲ ಹೊರಟಾಗಲೂ ಯಾರಾದರೂ ಟೀಕಿಸಿದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. 

* ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡಬ್ಲು.ಟಿ.ಎಫ್.‌ ಟೆನಿಸ್‌ ಟೂರ್ನಿ ಏರ್ಪಡಿಸಿ ದೊಡ್ಡ ದೊಡ್ಡ ಟೆನ್ನಿಸ್‌ ಆಟಗಾರರನ್ನು ಕರೆಸಿ ಟೂರ್ನಿಯನ್ನು ಯಶಸ್ವಿಯಾಗಿಸಿದ್ದು ಅವರ ಹೆಗ್ಗಳಿಕೆ.  

* ಮುಖ್ಯಮಂತ್ರಿಯಾದಾಗ ಎಲ್ಲ ಮಾಜಿ ಮುಖ್ಯಮಂತ್ರಿಗಳ ಮನೆಗೂ ಹೋಗಿ ಅವರ ಹಾರೈಕೆ ಪಡೆದು ಬಂದ ಏಕೈಕ ರಾಜಕಾರಣಿ ಎಸ್‌.ಎಂ.ಕೃಷ್ಣ.  

* ಅವರು ಕಾಂಗ್ರೆಸ್ಸಿಗರಾಗಿದ್ದರೂ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಅವರೊಡನೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ದ್ವೇಷರಾಜಕಾರಣದಿಂದ ಬಲುದೂರ.  

* ಒಮ್ಮೆ ವಿದೇಶಿ ನಿಯೋಗ ಬಂದಾಗ ಅಮೆರಿಕದ ಒಂದು ವಿಷಯದ ಬಗ್ಗೆ ವಿವರಣೆ ನೀಡುವಲ್ಲಿ ತಪ್ಪೆಸಗಿದ್ದರು. ಆಗ ಕೃಷ್ಣ ಅವರು ತಿದ್ದಿ ವಿವರಿಸಿ ಅವರನ್ನೇ ಆವಾಕ್ಕಾಗಿಸಿದ್ದರು.  

* ಕನ್ನಡ ಹಾಗೂ ಇಂಗ್ಲಿಷ್‌ ಮೇಲೆ ಅಪಾರ ಹಿಡಿತ ಇತ್ತು; ಎಲ್ಲಿ ಹೇಗೆ ಏನು ಮಾತಾಡಬೇಕೆಂಬ ಪ್ರಜ್ಞೆ ತುಂಬಾ ಇತ್ತು. 

* ತುಂಬಾ ಓದುತ್ತಿದ್ದರು. ಅವರ ಪುಸ್ತಕಭಂಡಾರ ಮತ್ತು ಜ್ಞಾನಭಂಡಾರ ದೊಡ್ಡದು.   

* ಸುಂದರಾಂಗ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಅವರು ಎಲ್ಲಿಯಾದರೂ ಹೋದರೆ ಅವರ ಜೊತೆ ಫೊಟೊ ತೆಗೆಸಿಕೊಳ್ಳಲು ಯುವಕ ಯುವತಿಯರು ಮುಗಿಬೀಳುತ್ತಿದ್ದರು.  

* ಡಾ.ರಾಜಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ ಸಮಯ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಬಗೆಹರಿಸಿ ಸೈ ಎನ್ನಿಸಿಕೊಂಡರು. 

* ರಾಜಕಾರಣಿಯಾಗಿ ೬೦ ವರ್ಷ ಸಕ್ರಿಯರಾಗಿದ್ದು ಏಳುಬೀಳುಗಳಿದ್ದರೂ ಸ್ಥಿರವಾಗಿ ನಿಂತ ವ್ಯಕ್ತಿತ್ವ.  

* ಆಹಾರಪ್ರಿಯರಾಗಿದ್ದರು ಎಸ್‌.ಎಂ.ಕೃಷ್ಣ. ಬೆಂಗಳೂರಿನ ಜನಪ್ರಿಯ ಹೊಟೇಲುಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು.    

* ಅವರ ಆರೋಗ್ಯಕರ, ಸಮೃದ್ಧ, ತುಂಬು ಜೀವನ ಎಂಥವರೂ ಹೊಟ್ಟೆಕಿಚ್ಚುಪಡುವಂತಿದೆ; ಮಾದರಿಯಾಗೂ ಇದೆ. 
(ಸಂಗ್ರಹ) 

  

Share6Tweet4SendShareShare
Next Post
ಗಾರ್ಗಿಯ ಡೈರಿಯಿಂದ.. 

ಗಾರ್ಗಿಯ ಡೈರಿಯಿಂದ.. 

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.